ಉಡುಪಿ ಶ್ರೀ ಲಕ್ಷ್ಮೀ ವೆಂಕಟೇಶ ದೇವಸ್ಥಾನದಲ್ಲಿ ಪೂಜಿತ ಶಾರದಾ ಮಾತೆಯ ವಿಸರ್ಜನೆ 

ಉಡು​ಪಿ ಶ್ರೀ ಲಕ್ಷ್ಮೀ ವೆಂಕಟೇಶ ದೇವಸ್ಥಾನ​ದಲ್ಲಿ ​ನವರಾತ್ರಿ ಪೂಜಿತ ಶ್ರೀ ಶಾರದಾ ಮಾತೆಯ ಶೋಭಾ ಯಾತ್ರೆಗೆ ಮಂಗಳವಾರ ರಾತ್ರಿ  ದೇವಳದ ಪ್ರಧಾನ ಅರ್ಚಕರಾದ ದಯಾಘಾನ್ ಭಟ್ ಮಹಾ ಪೂಜೆ  ನೆರವೇರಿಸಿ ಚಾಲನೆ ನೀಡಿದರು​. ದೇವಳದ ಹೊರ ಪ್ರಾಂಗಣದಲ್ಲಿ ಶ್ರೀ ಶಾರದಾ ಮಾತೆಯ ಮೂರ್ತಿಯನ್ನು ಸ್ವಯಂ ಸೇವಕರು ಭುಜದ ಮೇಲೆ ಹೊತ್ತು  ಮೆರವಣಿಗೆ ನೆಡೆಸಿದರು​.ಮಂಗಳ ವಾದ್ಯ,​ ​ನಾಸಿಕ್ ಬ್ಯಾಂಡ್,​ ​ಭಜನೆಯೊಂದಿಗೆ ಹೆಜ್ಜೆ ಹಾಕುತ್ತಾ ಭಕ್ತರು ​ಕುಣಿದಾಡಿದರು.  ದೇವಳದ ಪುಷ್ಕರಣೆಯಲ್ಲಿ ಶಾರದಾ ಮಾತೆಯ ತೆಪ್ಪೋತ್ಸವ ನೆಡೆಸಿ  ವಿಸರ್ಜನೆ ಮಾಡಲಾಯಿತು​.   ಬಳಿಕ  ಅನ್ನಸಂತರ್ಪಣೆ ನೆಡೆಯಿತು. ಈ ಸಂದರ್ಭದಲ್ಲಿ ದೇವಳದ ಧರ್ಮದರ್ಶಿ ಪಿ​.​ವಿ ಶೆಣೈ,​ ​ವಿಶ್ವನಾಥ ಭಟ್,​ ​ಮಟ್ಟಾರ್ ವಸಂತ್ ಕಿಣಿ, ರೋಹಿತಾಕ್ಷ ಪಡಿಯಾರ,​ ​ಪುಂಡಲೀಕ ಕಾಮತ್,​ ​ಕೈಲಾಶನಾಥ್ ಶೆಣೈ,​ ​ದೇವದಾಸ್ ಪೈ,​ ​ನಾರಾಯಣ ಪ್ರಭು,​ ​ಅಶೋಕ ಬಾಳಿಗಾ,​ ​ಉಮೇಶ ಪೈ , ಎ ಗಣೇಶ್ ಕಿಣಿ​, ​ಸುರೇಶ ನಾಯಕ್,​ ​ಶಾಂತಾರಾಮ್ ಶಾನಭಾಗ್,​ ​ಪ್ರಕಾಶ್ ಭಕ್ತ ಹಾಗೂ  ಸುಬ್ರಮಣ್ಯ  ಪೈ,​ ​ವಿಶಾಲ್ ಶೆಣೈ,​ ​ನರಹರಿ ಪೈ  ನಾರಾಯಣ ಭಟ್,​ ​ಮಟ್ಟಾರ್​​ ಗಣೇಶ್ ಕಿಣಿ,​ ​ಜಿ.ಎಸ.ಬಿ ಮಹಿಳಾ ಮಂಡಳಿಯ ಹಾಗೂ ಯುವಕ ಮಂಡಳಿಯ  ಸದಸ್ಯರು ಹಾಗು  ಸಮಾಜ ಬಂದವ​ರು ​​​ಉಪಸ್ಥರಿದ್ದರು​​     

 
 
 
 
 
 
 
 
 
 
 

Leave a Reply