ಉಡುಪಿ ಶ್ರೀ ಲಕ್ಷ್ಮೀ ವೆಂಕಟೇಶ ದೇವಸ್ಥಾನದಲ್ಲಿ ನವರಾತ್ರಿ ಪೂಜಿತ ಶ್ರೀ ಶಾರದಾ ಮಾತೆಯ ಶೋಭಾ ಯಾತ್ರೆಗೆ ಮಂಗಳವಾರ ರಾತ್ರಿ ದೇವಳದ ಪ್ರಧಾನ ಅರ್ಚಕರಾದ ದಯಾಘಾನ್ ಭಟ್ ಮಹಾ ಪೂಜೆ ನೆರವೇರಿಸಿ ಚಾಲನೆ ನೀಡಿದರು. ದೇವಳದ ಹೊರ ಪ್ರಾಂಗಣದಲ್ಲಿ ಶ್ರೀ ಶಾರದಾ ಮಾತೆಯ ಮೂರ್ತಿಯನ್ನು ಸ್ವಯಂ ಸೇವಕರು ಭುಜದ ಮೇಲೆ ಹೊತ್ತು ಮೆರವಣಿಗೆ ನೆಡೆಸಿದರು.ಮಂಗಳ ವಾದ್ಯ, ನಾಸಿಕ್ ಬ್ಯಾಂಡ್, ಭಜನೆಯೊಂದಿಗೆ ಹೆಜ್ಜೆ ಹಾಕುತ್ತಾ ಭಕ್ತರು ಕುಣಿದಾಡಿದರು. ದೇವಳದ ಪುಷ್ಕರಣೆಯಲ್ಲಿ ಶಾರದಾ ಮಾತೆಯ ತೆಪ್ಪೋತ್ಸವ ನೆಡೆಸಿ ವಿಸರ್ಜನೆ ಮಾಡಲಾಯಿತು. ಬಳಿಕ ಅನ್ನಸಂತರ್ಪಣೆ ನೆಡೆಯಿತು. ಈ ಸಂದರ್ಭದಲ್ಲಿ ದೇವಳದ ಧರ್ಮದರ್ಶಿ ಪಿ.ವಿ ಶೆಣೈ, ವಿಶ್ವನಾಥ ಭಟ್, ಮಟ್ಟಾರ್ ವಸಂತ್ ಕಿಣಿ, ರೋಹಿತಾಕ್ಷ ಪಡಿಯಾರ, ಪುಂಡಲೀಕ ಕಾಮತ್, ಕೈಲಾಶನಾಥ್ ಶೆಣೈ, ದೇವದಾಸ್ ಪೈ, ನಾರಾಯಣ ಪ್ರಭು, ಅಶೋಕ ಬಾಳಿಗಾ, ಉಮೇಶ ಪೈ , ಎ ಗಣೇಶ್ ಕಿಣಿ, ಸುರೇಶ ನಾಯಕ್, ಶಾಂತಾರಾಮ್ ಶಾನಭಾಗ್, ಪ್ರಕಾಶ್ ಭಕ್ತ ಹಾಗೂ ಸುಬ್ರಮಣ್ಯ ಪೈ, ವಿಶಾಲ್ ಶೆಣೈ, ನರಹರಿ ಪೈ ನಾರಾಯಣ ಭಟ್, ಮಟ್ಟಾರ್ ಗಣೇಶ್ ಕಿಣಿ, ಜಿ.ಎಸ.ಬಿ ಮಹಿಳಾ ಮಂಡಳಿಯ ಹಾಗೂ ಯುವಕ ಮಂಡಳಿಯ ಸದಸ್ಯರು ಹಾಗು ಸಮಾಜ ಬಂದವರು ಉಪಸ್ಥರಿದ್ದರು