ಉಡುಪಿ ಸಾರ್ವಜನಿಕ ಶಾರದಾ ಸಮಿತಿಯ ಶಾರದಾ ದೇವಿಯ ಶೋಭಾಯಾತ್ರೆ  

ಉಡುಪಿ ಸಾರ್ವಜನಿಕ ಶಾರದಾ ಸಮಿತಿ ಹಮ್ಮಿಕೊಂಡ 5 ನೇ ವರ್ಷದ ಶಾರದಾ ದೇವಿಯ ಶೋಭಾಯಾತ್ರೆಗೆ ಅರ್ಚಕರಾದ  ಶಶಿಧರ್ ಭಟ್   ಶಾರದಾ ದೇವಿಗೆ ಆರತಿ  ಬೆಳಗಿಸಿ ಶೋಭಾಯಾತ್ರೆಗೆ ಚಾಲನೆ ನೀಡಿದರು. ಯಾತ್ರೆಯಲ್ಲಿ  ಮಹಿಳಾ  ಚಂಡೆ ವಾದನ ಅಲಂಕೃತವಾದ  ವಾಹನ  ಏರಿ ಕುಳಿತ ಶಾರದಾ ದೇವಿಯ ಶೋಭಾ ಯಾತ್ರೆ ಪಾರ್ಕಿಂಗ್ ಏರಿಯಾದಿಂದ ಹೊರಟು  ಕಲ್ಸನ್ಕ ಮಾರ್ಗವಾಗಿ  ಶಂಕರ ನಾರಾಯಣ ದೇವಾಲಯದ ಪದ್ಮ ಸರೋವರದಲ್ಲಿ ವಿಸರ್ಜನೆ ಮಾಡಲಾಯಿತು.

ಈ ಸಂದರ್ಭದಲ್ಲಿ ಸಮಿತಿಯ ಅಧ್ಯಕ್ಷ ಸುಪ್ರಸಾದ್ ಶೆಟ್ಟಿ, ಮಟ್ಟು ಲಕ್ಷ್ಮೀನಾರಾಯಣ ರಾವ್, ಸುರೇಶ ಶೆಟ್ಟಿ , ಮಹೇಶ್ ಶೆಟ್ಟಿ, ದಾಮೋಧರ್ ಭಟ್,  ತಾರಾ ಆಚಾರ್ಯ,  ಹಾಗು  ನೂರಾರು  ಭಕ್ತರು ಉಪಸ್ಥಿತರಿದ್ದರು

 
 
 
 
 
 
 
 
 
 
 

Leave a Reply