ಅಬುದಾಭಿಯಲ್ಲಿಂದು ಸರಕಾರದ ಕ್ಯಾಬಿನೇಟ್ ಮಂತ್ರಿಗಳಾದ ಸಮಾಜ ಧರ್ಮ ಸಾಮರಸ್ಯ ಸಚಿವ ಶೇಖ್ ನಹ್ಯಾನ್ ಬಿನ್ ಮುಬಾರಕ್ ಅಲ್ ನಹ್ಯಾನ್ ರೊಂದಿಗೆ ಸೌಹಾರ್ದ ಭೇಟಿ ನಡೆಯಿತು .
ಈ ಸಂದರ್ಭದಲ್ಲಿ ಸಮಕಾಲೀನ ಸಮಸ್ಯೆಗಳ ಬಗ್ಗೆ , ಸಮಾಜದಲ್ಲಿ ಪರಸ್ಪರ ಶಾಂತಿ ಸೌಹಾರ್ದ ವನ್ನು ಗಟ್ಟಿಗಳಿಸುವಲ್ಲಿ ಧಾರ್ಮಿ ಕ ನಾಯಕರು ಕೈಗೊಳ್ಳುವ ಕ್ರಮಗಳ ಬಗ್ಗೆ ವಿಸ್ತೃತ ಚರ್ಚೆ ನಡೆಯಿತು .
ಬಳಿಕ ಪೂಜ್ಯ ಶ್ರೀಪಾದರ ಸಮಾಜಮುಖಿ ಯೋಜನೆಯಾದ ಕೋಟಿ ಗೀತಾ ಲೇಖನ ಯಜ್ಞದ ಬಗ್ಗೆ ಶ್ರೀಗಳು ವಿವರಿಸಿದರು. ಮಂತ್ರಿಗಳು ಶ್ರೀಗಳ ವಿಶ್ವಶಾಂತಿ ನಾಯಕತ್ವದ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದರು.
ಶ್ರೀಗಳು ತಮ್ಮ ಮುಂಬರುವ ಶ್ರೀ ಕೃಷ್ಣ ಪೂಜಾ ಪರ್ಯಾಯಕ್ಕೆ ಪ್ರೀತಿಪೂರ್ವಕ ಆಹ್ವಾನಿಸಿದಾಗ ಮಂತ್ರಿಗಳು ಸಂತೋಷದಿಂದ ಒಪ್ಪಿಗೆ ಸೂಚಿಸಿದರು.