ಭಾವಿ ಪರ್ಯಾಯ ಮಠಾಧೀಶರಾದ ಪರಮಪೂಜ್ಯ ಶ್ರೀ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರು ತಮ್ಮ ಶಿಷ್ಯ ಶ್ರೀ ಶ್ರೀ ಸುಶ್ರೀ೦ದ್ರ ತೀರ್ಥ ಶ್ರೀಪಾದರ ಜೊತೆಗೆ ಭಕ್ತ ಜನರ ಅಪೇಕ್ಷೆ ಮೇರೆಗೆ ಬೆಂಗಳೂರು ನಗರದ ಗೋವರ್ಧನ ಕ್ಷೇತ್ರ , ಶ್ರೀ ಪುತ್ತಿಗೆ ಮಠದಲ್ಲಿ ಚಾತುರ್ಮಾಸ್ಯವ್ರತವನ್ನುಈ ಬಾರಿ ನಡೆಸಲಿದ್ದಾರೆ.
ಈ ಬಗ್ಗೆ ನಡೆಯಲಿರುವ ವಿಶೇಷ ಸಿದ್ಧತೆಗಳ ಬಗ್ಗೆ ಎರಡನೆಯ ಸಮಾಲೋಚನಾ ಸಭೆ ಇಂದು ಶ್ರೀ ಗೋವರ್ಧನ ಕ್ಷೇತ್ರ ,ಶ್ರೀ ಪುತ್ತಿಗೆ ಮಠ ದಲ್ಲಿ ನಡೆಯಿತು. ಸಭೆಯಲ್ಲಿ ಸಮಾಜದ ಅನೇಕ ಗಣ್ಯರು ಉಪಸ್ಥಿತರಿದ್ದು ತಮ್ಮ ಸಲಹೆ, ಸಹಕಾರ ವನ್ನು ನೀಡಿದರು