ಇಂದು ಕೀರ್ತಿ ಶೇಷ ಪೇಜಾವರ ಶ್ರೀ ಶ್ರೀ ವಿಶ್ವೇಶ ತೀರ್ಥರ ಜನ್ಮ ನಕ್ಷತ್ರ (ವರ್ಧಂತಿ)

ರಾಮಕುಂಜವೆಂಬ ಪುಟ್ಟ ಗ್ರಾಮದಲ್ಲಿ ಜನ್ಮತಾಳಿದ ವಾಮನಮೂರ್ತಿಗಳು, ಬಾಲ್ಯದಲ್ಲೇ ಸನ್ಯಾಸಿಯಾಗಿ ಜಗದ ಉದ್ದಗಲಕ್ಕೂ ಶ್ರೇಷ್ಠ, ಸಮರ್ಥ ಯತಿಯಾಗಿ ಕೀರ್ತಿಗಳಿಸಿದರು. ಸಾಮಾಜಿಕ ಕಾಳಜಿ ಹೊಂದಿದ್ದ ಯತಿಗಳು ಸಾಧನೆ ಮೂಲಕ ಹಲವಾರು ಪರಿವರ್ತನೆ ಮಾಡಿದರು.

ಎಲ್ಲಾ ಪಂಥ, ಮತಗಳೊಡನೆ ಸಾಮರಸ್ಯ ಹೊಂದಿದ್ದ ಮಹನೀಯರು ಹಿಂದೂ ಧರ್ಮದ ಮೇರು ಶಿಖರ. ಇರುವಷ್ಟು ದಿನ ಅಯೋಧ್ಯಾ ಶ್ರೀರಾಮ ಜನ್ಮಭೂಮಿಗಾಗಿ ಹೋರಾಟ ನಡೆಸಿ ಕೊನೆಗೆ ಶ್ರೀರಾಮ ವಿಠ್ಠಲನಲ್ಲೇ ಲೀನವಾದರು.

ಶತಮಾನ ಕಂಡ ಅಪರೂಪದ ಯತಿಗಳನ್ನ ಸ್ಮರಿಸೋಣ, ನಮ್ಮ ಹೃತ್ಪದ್ಮದಲ್ಲಿರುವ ಮಹನೀಯರಿಗೆ ನಮಿಸೋಣ..

ತಪಸ್ವಾಧ್ಯಾಯಶುಶ್ರೂಷಾ ಕೃಷ್ಣ ಪೂಜಾರತಮ್ ಮುನಿಮ್ |

ವಿಶ್ವೇಶಮ್ ಇಷ್ಟದಂ ವಂದೇ ಪರಿವ್ರಾಟ್ ಚಕ್ರವರ್ತಿನಮ್ ||

 

 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 

Leave a Reply