ಜಗದ್ಗುರು ಶ್ರೀ ಮಧ್ವಾಚಾರ್ಯ ಸಂಸ್ಥಾನದ ಪ್ರೇಮ‌ಪೀಠದ ಆಚಾರ್ಯ ಲಲಿತ್ ಮೋಹನ್ ಓಜಾ ಅವರು ಹರಿದ್ವಾರದ ಶ್ರೀ ಪೇಜಾವರ ಶಾಖಾ ಮಠದಲ್ಲಿ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರ ಬೇಟಿ.

ಸುಮಾರು 5 ಶತಮಾನಗಳ ಇತಿಹಾಸ ಇರುವ ರಾಜಸ್ಥಾನದ ( ಮಹಾಭಾರತದ ತ್ರಿಗರ್ತದೇಶ) ಜಗದ್ಗುರು ಶ್ರೀ ಮಧ್ವಾ ಚಾರ್ಯ ಸಂಸ್ಥಾನದ ಪ್ರೇಮ‌ಪೀಠದ ( ಸಂತ ಮೀರಾಬಾಯಿ ಪರಂಪರೆ) ಆಚಾರ್ಯ ಲಲಿತ್ ಮೋಹನ್ ಓಜಾ ಅವರು ಹರಿ ದ್ವಾರದ ಶ್ರೀ ಪೇಜಾವರ ಶಾಖಾ ಮಠದಲ್ಲಿ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರನ್ನು ಭೇಟಿಯಾಗಿ ಅಲ್ಲಿನ ಸಾಂಪ್ರದಾಯಿಕ ಪೇಟಾ ತೊಡಿಸಿ ಗೌರವಿಸಿದರು

ಉಡುಪಿ ಅಷ್ಟಮಠಗಳೊಂದಿಗೆ ಉತ್ತಮ ಬಾಂಧವ್ಯ ಹೊಂದಿರುವ ಈ ಕ್ಷೇತ್ರವನ್ನು ಶ್ರೀ ಓಜಾರವರು ಉತ್ತಮ ರೀತಿಯಲ್ಲಿ ಅಭಿವೃದ್ಧಿ ಪಡಿಸಿ ಮಧ್ವಮತಪ್ರಸಾರಕಾರ್ಯ ನಡೆಸುತ್ತಿ ದ್ದಾರೆ .

ಆದ್ದರಿಂದ ಉತ್ತರಭಾರತಕ್ಕೆ ಭೇಟಿಕೊಡುವ ಉಡುಪಿಯ ಸಮಸ್ತ ಕೃಷ್ಣ ಭಕ್ತರು ಅವಶ್ಯ ವಾಗಿ ಈ ಕ್ಷೇತ್ರಕ್ಜೆ ಭೇಟಿ ಕೊಡಬೇಕೆಂದು ಪೇಜಾವರ ಶ್ರೀಗಳು ಆಶಿಸಿದ್ದಾರೆ

 
 
 
 
 
 
 
 
 
 
 

Leave a Reply