ಪಾಜಕಕ್ಷೇತ್ರದಲ್ಲಿ ಕಾಣಿಯೂರು ಮಠಾಧೀಶರಿಂದ ಮಧ್ವನವಮಿಯ ವಿಶೇಷ ಪೂಜೆ

ಜಗದ್ಗುರು ಶ್ರೀಮನ್ಮಧ್ವಾಚಾರ್ಯರ ಅವತಾರವೆತ್ತಿದ ಪುಣ್ಯ ಸ್ಥಳ ಪಾಜಕಕ್ಷೇತ್ರದಲ್ಲಿ ಮಧ್ವನವಮಿಯ ಪ್ರಯುಕ್ತ ಕಾಣಿಯೂರು ಮಠಾಧೀಶರಾದ ಶ್ರೀ ವಿದ್ಯಾವಲ್ಲಭತೀರ್ಥ ಶ್ರೀಪಾದರ ಉಪಸ್ಥಿತಿಯಲ್ಲಿ 7 ದಿನಗಳಿಂದ ನಡೆಯುತಿದ್ದ ಋಗ್ ಸಂಹಿತಾ ಯಾಗದ ಪೂರ್ಣಾಹುತಿ,ವಿದ್ವಾಂಸರಿಂದ ಸರ್ವಮೂಲ ಪಾರಾಯಣ, ಪ್ರವಚನಗಳು ನಡೆದವು.

 

ಆಚಾರ್ಯ ಮಧ್ವರ ಪಾದದ ಗುರುತಿರುವ ಸ್ಥಳದಲ್ಲಿ ಶ್ರೀ ವಾದಿರಾಜಗುರುಗಳಿಂದ ಪ್ರತಿಷ್ಠಿತ ಆಚಾರ್ಯ ಮಧ್ವರ ಮೂರ್ತಿಗೆ ಕಾಣಿಯೂರು ಶ್ರೀಪಾದರು ವಿಶೇಷ ಪೂಜೆಯನ್ನು ಸಲ್ಲಿಸಿದರು.

 

 

 

 
 
 
 
 
 
 
 
 
 
 

Leave a Reply