ಮಲ್ಪೆ ಮಾಲ್ದಿ ದ್ವೀಪದಲ್ಲಿ ವಿಶೇಷ ಸಂಕ್ರಾತಿ ಪೂಜೆ

ಕೊಡವೂರು ಶಂಕರನಾರಾಯಣ ದೇವಸ್ಥಾನದ ವತಿಯಿಂದ ಪ್ರತಿವರ್ಷದಂತೆ ಈ ಸಲವೂ ಮಲ್ಪೆ ಪಡುಕರೆ ಸಮೀಪ ಸಮುದ್ರ ಮಧ್ಯ ಇರುವ ಮಾಲ್ದಿ ದ್ವೀಪದಲ್ಲಿ ಮಕರ ಸಂಕ್ರಮಣದ ವಿಶೇಷ ಪೂಜೆ ನಡೆಯಿತು. ದೇವಸ್ಥಾನದ ಆಡಳಿತ ಮಂಡಳಿ ಮತ್ತು ಮೀನುಗಾರರು ದೇಗುಲದಲ್ಲಿ ಪೂಜೆ ಸಲ್ಲಿಸಿ, ಬಳಿಕ ಮಾಲ್ದಿ ದ್ವೀಪಕ್ಕೆ ತೆರಳಿಪೂಜೆ ಸಲ್ಲಿಸಿದ್ದರು.
ದೇವಸ್ಥಾನದ ತಂತ್ರಿಗಳಾದ ಪುತ್ತೂರು ಹಯವದನ ತಂತ್ರಿ ನೇತೃತ್ವದಲ್ಲಿ ಪೂಜಾ ವಿಧಿವಿಧಾನಗಳು ಜರಗಿದವು. ಬಳಿಕ ಸಮುದ್ರರಾಜನಿಗೆ ಪುಷ್ಪ, ಕ್ಷೀರ ಮತ್ತು ಸಿಯಾಳವನ್ನು ಸಮರ್ಪಿಸಿ ಸಾಮೂಹಿಕವಾಗಿ ಪ್ರಾರ್ಥನೆ ಸಲ್ಲಿಸಲಾಯಿತು.
ವ್ಯವಸ್ಥಾಪನಾ ಸಮಿತಿಅಧ್ಯಕ್ಷ ಸಾಲ್ಯಾನ್, ಸದಸ್ಯರುಗಳಾದ ಸುಧೀರ್  ರಾವ್ ಕೊಡವೂರು, ಗೋವಿಂದ ಪಾಲನ್, ಜೀವನ್ ಕುಮಾರ್ ಪಾಳೆಕಟ್ಟೆ, ಪೂರ್ಣಿಮಾ ಜನಾರ್ದನ್, ಚಂದ್ರಾವತಿ, ಮೀನುಗಾರ ಸಂಘದ ಮಾಜಿ ಅಧ್ಯಕ್ಷ  ಕೃಷ್ಣ ಸುವರ್ಣ, ಪ್ರಮುಖರಾದ ಜನಾರ್ದನ ಕೊಡವೂರು, ಉಮೇಶ್ ಕಾಂಚನ್, ಸತೀಶ್ ಕೋಟ್ಯಾನ್, ಗಣೇಶ್ ಮಲ್ಪೆ ಸೇರಿದಂತೆ ನೂರಾರು ಭಕ್ತರು ಪಾಲ್ಗೊಂಡಿದ್ದರು.
 
 
 
 
 
 
 
 
 

Leave a Reply