ಉಡುಪಿ ಕೃಷ್ಣ ಮಠ​ದಲ್ಲಿ ಮರದ ಕೆತ್ತನೆಯ ಕನ್ನಡ ನಾಮಫಲಕ ಅಳವಡಿಕೆ: ಪುರುಷೋತ್ತಮ ಅಡ್ವೆ

ಉಡುಪಿ: ಪ್ಲಾಸ್ಟಿಕ್ ನಿಷೇದ ಹಿನ್ನಲೆಯಲ್ಲಿ ಪ್ಲಾಸ್ಟಿಕ್ ಫ್ಲೆಕ್ಸ್‌ನ್ನು ತೆಗೆಯಲಾಗಿದೆ. ಕನ್ನಡದಲ್ಲಿ ​”​ಕೃಷ್ಣ ಮಠ​”​ ಹೆಸರಿನ ನಾಮ ಫಲಕ ಪ್ಲಾಸ್ಟಿಕ್ ಆಗಿದ್ದು,​ ​ಈಗಾಗಲೇ ತೆಗೆದು ಮೂಲ ತುಳು ಮತ್ತು ಸಂಸ್ಕೃತದಲ್ಲಿ ಮರದ ನಾಮಫಲಕ ಅಳವಡಿಸಲಾಗಿದೆ.​ ​ಒಂದೇ ಫಲಕದಲ್ಲಿ ಕನ್ನಡ ತುಳು ಮತ್ತು ಸಂಸ್ಕೃತದ ಫಲಕ ಅಂದ ಹಾಳುಮಾಡುತ್ತದೆ.

ಈ ಹಿನ್ನಲೆಯಲ್ಲಿ ತುಳು ಮತ್ತು ಸಂಸ್ಕೃತ ಫಲಕ ಮೊದಲು ಅಳವಡಿಸಲಾಗಿದೆ.​ ​ಲಕ್ಷದೀಪೋತ್ಸವ ಹಿನ್ನಲೆಯಲ್ಲಿ ಕನ್ನಡ ಫಲಕ ಅಳವಡಿಕೆ ವಿಳಂಭವಾಗಿದೆ.​ ​ಈಗಾಗಲೇ ಕನ್ನಡ ಭಾಷೆಯ ಮರದ ನಾಮಫಲಕ ಕೆತ್ತನೆ ಪ್ರಕ್ರಿಯೆ ಮುಕ್ತಾಯ ಹಂತದಲ್ಲಿದೆ.

ಕೆಲವೇ ದಿನದಲ್ಲೇ ​ಮಠದ ಮುಂಭಾಗದಲ್ಲಿ ಕನ್ನಡ ನಾಮಫಲಕ ಅಳವಡಿಸಲಾಗುವುದು ಎಂದು ಕೃಷ್ಣ ಮಠದ ಕಲೆ ಸಂಸ್ಕೃತಿ ಸಲಹೆಗಾರ ಪುರುಷೋತ್ತಮ ಅಡ್ವೆ ​ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 

 
 
 
 
 
 
 
 
 

Leave a Reply