ಮದುವೆಗೆ ಬಂದವರನ್ನ ಹೊರಕ್ಕೆ ಕಳುಹಿಸಿದ ಅಧಿಕಾರಿಗಳು**

ಕಾರವಾರ : ಉತ್ತರ ಕನ್ನಡ ಜಿಲ್ಲೆಯ ಕಾರವಾರ ನಗರದಲ್ಲಿ ಮದುವೆ ಸಮಾರಂಭಕ್ಕೆ ಬಂದ ವರನ್ನು ಅಧಿಕಾರಿಗಳು ಹೊರಕ್ಕೆ ಕಳುಹಿಸಿದ ಘಟನೆ ಶೇಜುವಾಡದಲ್ಲಿ ನಡೆದಿದೆ.

ಶೇಜುವಾಡದ ಸದಾನಂದ ಪ್ಯಾಲೇಸ್ ನಲ್ಲಿ ಮದುವೆ ನಿಗದಿಯಾಗಿತ್ತು. ಮದುವೆ ಸಮಾರಂಭದಲ್ಲಿ 50 ಕ್ಕೂ ಅಧಿಕ ಜನ ಸೇರಿದ ಹಿನ್ನೆಲೆಯಲ್ಲಿ ಸ್ಥಳಕ್ಕೆ ಅಧಿಕಾರಿಗಳು ಹಾಗೂ ಪೊಲೀಸರ ತಂಡ ಭೇಟಿ ನೀಡಿದ್ದಾರೆ.

ಬಳಿಕ ಅಧಿಕಾರಿಗಳು ಮದುವೆಗೆ ಬಂದವರನ್ನು ಹೊರಕ್ಕೆ ಕಳುಹಿಸಿದ್ದಾರೆ. ಬಂದವರಿಗೂ, ಮದುವೆ ಆಯೋಜಿಸಿದವರಿಗೂ ತೀವ್ರ ಮುಜುಗರಕ್ಕೆ ಒಳಗಾದರು.

 
 
 
 
 
 
 
 
 

Leave a Reply