ಕುವೆಂಪು ಜನ್ಮದಿನದಂದು ಕನ್ನಡಪರ ಜಾಗೃತಿ ಅಭಿಯಾನ

ರಾಷ್ಟ್ರಕವಿ ಕುವೆಂಪು ಅವರ ಜನ್ಮದಿನದ ಅಂಗವಾಗಿ ಕನಾ೯ಟಕ ಸರಕಾರ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಕನ್ನಡಪರ ಆಶಯದಂತೆ
ಉಡುಪಿ ಜಿಲ್ಲಾ ಕನ್ನಡ ಜಾಗೃತಿ ಸಮಿತಿಯ ಸದಸ್ಯರಾದ ರಂಗನಟ ಸುಕುಮಾರ್ ಮೋಹನ್, ಸಾಹಿತಿ ಡಾ.ಕಾತ್ಯಾಯಿನಿ ಕುಂಜಿಬೆಟ್ಟು, ರಂಗನಟಿಯರಾದ ಶಿಲ್ಪ ಜೋಷಿ , ದೀಪಿಕಾ ಭಟ್ ಹಾಗೂ ಕನ್ನಡಾಭಿಮಾನಿಗಳಾದ ನಾಗೇಂದ್ರ ಭಟ್, ಸಂದೇಶ್ ಕೋಟ್ಯಾನ್ ಹಾಗೂ ರಂಜನ್ ಇವರು ಕನ್ನಡ ಪರ ಘೋಷ ವಾಕ್ಯಗಳ ಪ್ರದಶ೯ನದೊಂದಿಗೆ ಉಡುಪಿ ಮಣಿಪಾಲದ ವಿವಿಧ ಬ್ಯಾಂಕುಗಳಿಗೆ ಭೇಟಿ ನೀಡಿ ‘ಕನ್ನಡ ದಲ್ಲೇ ನಿತ್ಯ ವ್ಯವಹರಿಸುವ ಮೂಲಕ ಕನ್ನಡ ನಾಡಿನಲ್ಲಿ ಕನ್ನಡವನ್ನು  ಉಳಿಸುವ ಬೆಳೆಸುವ ‘ ಎಂಬ ಹಕ್ಕೊತ್ತಾಯದ ವಿನಂತಿ ಪತ್ರವನ್ನು ಬ್ಯಾಂಕುಗಳ ಮುಖ್ಯಸ್ಥರಿಗೆ ನೀಡಿದರು.
 
 
 
 
 
 
 
 
 

Leave a Reply