ಪರ್ಯಾಯ ಶ್ರೀ ಕೃಷ್ಣಾಪುರ ಮಠ
ನಿರಂತರ ಜ್ಞಾನಯಜ್ಞದಲ್ಲಿ ಡಾ.ಮಧುಸೂದನ್ ಭಟ್ ರವರಿಂದ ಪ್ರವಚನ ಸಪ್ತಾಹ.
ಕುಂಜಿಬೆಟ್ಟು ಉಪೇಂದ್ರ ಪೈ ಮೆಮೋರಿಯಲ್ ಕಾಲೇಜಿನ ಪ್ರಾಚಾರ್ಯ, ವಡಭಾಂಡೇಶ್ವರದ ನಿವಾಸಿ ಸಂಸ್ಕೃತ ವಿದ್ವಾನ್ ಡಾ.ಮಧುಸೂದನ್ ಭಟ್ ರವರಿಂದ ರಾಜಾಂಗಣದಲ್ಲಿ ಸಂಜೆ 6 ಗಂಟೆಗೆ ಇಂದಿನಿಂದ ಬರುವ ಭಾನುವಾರದ ವರೆಗೆ ಏಳುದಿನಗಳ ಕಾಲ ‘ಮಹಾಭಾರತ ಮೌಲ್ಯಗಳ ಸಮಕಾಲಿಕ ಚಿಂತನೆ’ ಎಂಬ ವಿಷಯದ ಕುರಿತು ನಿರಂತರ ಜ್ಞಾನಯಜ್ಞದ ಅಂಗವಾಗಿ ಪ್ರವಚನ ನಡೆಯಲಿದೆ, ಎಂದು ಈ ಮೂಲಕ ಪ್ರಕಟಣೆ ತಿಳಿಸಿದೆ.