ಅಯೋಧ್ಯೆ ಶ್ರೀರಾಮ ಮಂದಿರ ನಿಧಿ ಸಮರ್ಪಣಾ ಅಭಿಯಾನದ ಅಂಗವಾಗಿ ಪುತ್ತಿಗೆ ಶ್ರೀ ಸುಗುಣೇಂದ್ರ ತೀರ್ಥ ಸ್ವಾಮೀಜಿಯವರನ್ನು ಭೇಟಿ ಮಾಡಿ ಅಶೀರ್ವಚನ ಪಡೆಯಲಾಯಿತು.ಈ ಸಂದರ್ಭದಲ್ಲಿ ಮಾತನಾಡಿದ ಸ್ವಾಮೀಜಿಯವರು ಹಿಂದುಗಳ ಶ್ರದ್ಧಾ ಕೇಂದ್ರವಾದ ಅಯೋಧ್ಯೆಯಲ್ಲಿ ನಿರ್ಮಾಣಗೊಳ್ಳಲಿರುವ ಭವ್ಯವಾದ ಶ್ರೀರಾಮನ ಮಂದಿರಕ್ಕೆ ಪ್ರತಿಯೊಬ್ಬರೂ ತಮ್ಮ ಪಾಲಿನ ನಿಧಿಯನ್ನು ಸಮರ್ಪಿಸಬೇಕೆಂದು ಕರೆಯಿತ್ತರು.
ವಿಶ್ವ ಹಿಂದು ಪರಿಷತ್ತಿನ ಉಡುಪಿ ಜಿಲ್ಲಾಧ್ಯಕ್ಷರಾದ ಶ್ರೀ ವಿಷ್ಣು ಮೂರ್ತಿ ಆಚಾರ್ಯ, ರಾಷ್ಟ್ರೀಯ ಸ್ವಯಂಸೇವಕ ಸಂಘದ ನಗರ ಸಂಘ ಚಾಲಕರಾದ ಶ್ರೀ ರಾಮಚಂದ್ರ ಸನಿಲ್, ವಿಭಾಗ ಸಹ ಪ್ರಚಾರ ಪ್ರಮುಖ ಶ್ರೀ ಸುರೇಶ್ ಹೆಜಮಾಡಿ, ಶ್ರೀ ಗಣಪತಿ ನಾಯಕ್, ಶ್ರೀ ಕಿಶೋರ್ ಮತ್ತಿತರರು ಉಪಸ್ಥಿತರಿದ್ದರು