ಉಡುಪಿ ಶ್ರೀ ಲಕ್ಷ್ಮೀ ವೆಂಕಟೇಶ ದೇವಸ್ಥಾನ ಉಡುಪಿ, ಜಿ,ಸ್,ಬಿ, ಸಭಾ ಕೋಡಿಕಲ್ ಮಂಗಳೂರು, ಅಕ್ಷಯ ಪಾತ್ರ ಫೌಂಡೇಶನ್ ಮಂಗಳೂರು, ಇಸ್ಕಾನ್ ಫೌಂಡೇಶನ್ ಸಹಯೋಗದಲ್ಲಿ ಕೋವಿಡ್ ಪರಿಹಾರ ಕಿಟ್ ವಿತರಣೆ ಕಾರ್ಯಕ್ರಮವು ಆದಿತ್ಯವಾರ ಭುವನೇಂದ್ರ ಮಂಟಪದಲ್ಲಿ ಜರಗಿತು.
ಇಸ್ಕಾನ್ ಕೋವಿಡ್ ಪರಿಹಾರ ಕಾರ್ಯ ಸಂಯೋಜಕರಾದ ಪೂಜ್ಯ ಶ್ರೀ ಸನಂದನದಾಸ್ ಸ್ವಾಮೀಜಿ ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿದರು . ಅಕ್ಷಯ ಪತ್ರೆ ಯೋಜನೆಯಲ್ಲಿ ಶ್ರೀ ಕೃಷ್ಣ ಪ್ರಸಾದ ರೂಪದಲ್ಲಿ ಕಿಟ್ ವಿತರಣೆ ಮಾಡಿ , , ಕರ್ನಾಟಕ ರಾಜ್ಯದ ವಿವಿಧ ಭಾಗಗಳಲ್ಲಿ ಸುಮಾರು ಹನ್ನೆರೆಡು ಲಕ್ಷ ಜನರಿಗೆ ರೇಷನ್ ಕಿಟ್ ವಿತರಣೆ, ಸುಮಾರು ಹತ್ತು ಕೋಟಿ ಮೌಲ್ಯದ ಆರ್ಥಿಕ ವಾಗಿ ಹಿಂದುಳಿದ ಜನರಿಗೆ ನೀಡಲಾಗಿದೆ.
ಇದರ ಅಂಗವಾಗಿ ಉಡುಪಿ ಪರಿಸರ ಆರ್ಥಿಕ ವಾಗಿ ಹಿಂದುಳಿದ ಜಿ.ಸ್.ಬಿ. ಸಮಾಜದ 125 (ನೂರಾ ಇಪ್ಪತೈದು) ಜನರಿಗೆ ದಿನ ಉಪಯೋಗಿ ವಸ್ತುಗಳನ್ನು ಕಿಟ್ ವಿತರಿಸಲಾಯತು. ವೇದಿಕೆಯಲ್ಲಿ ಅಕ್ಷಯ ಪತ್ರೆ ಫೌಂಡೇಶನ್ ಅಧ್ಯಕ್ಷರಾದ ಗಣೇಶ್ ಕಾಮತ , ಕಾರ್ಯದರ್ಶಿ ರಾಮಾನಂದ ಶೆಣ್ಯ್ , ಬಸ್ತಿಕಾರ್ ಪುರುಷೋತ್ತಮ ಶೆಣ್ಯ್ , ನರಸಿಂಹ ಪ್ರಭು ಕುಂಬ್ಳೆ, ಸಂತೋಷ್ ಪೈ, ಮಾಧವ ಪ್ರಭು, ವಾಮನ್ ನಾಯಕ್, ಶ್ರೀಮತಿ ಇಂದಿರಾ ಕಾಮತ,
ಉಡುಪಿ ದೇವಳದ ಆಡಳಿತ ಮಂಡಳಿ ಸದಸ್ಯರಾದ ವಸಂತ್ ಕಿಣಿ ಸ್ವಾಗತಿಸಿದರು. ಕುಮಾರಿ ಭವ್ಯ ಭಟ್ ಕಾರ್ಯಕ್ರಮ ನಿರೂಪಿಸಿದರು.