ಪಡುಬೆಳ್ಳೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ವಿಶ್ವಹಿಂದು ಪರಿಷದ್, ಬಜರಂಗದಳ, ಮಾತೃಶಕ್ತಿ ಮತ್ತು ದುರ್ಗಾವಾಹಿನಿ ಶಿರ್ವ ವಲಯ ಇವರ ವತಿಯಿಂದ ಗೋಶಾಲೆಗಾಗಿ ಬೈಹುಲ್ಲು ಸಂಗ್ರಹ ಅಭಿಯಾನವನ್ನು ಒಂದು ವಾರ ನಡೆಸಿ ಸುಮಾರು 325 ಕಟ್ಟು ಬೈಹುಲ್ಲನ್ನು ಸಂಗ್ರಹಿಸಿ ನೀಲಾವರ ಗೋಶಾಲೆಗೆ ಸಾಗಿಸಲು ಹಿರಿಯ ಹಿಂದೂ ನೇತಾರರಾದ ಬೆಳ್ಳೆಅಂಗಡಿ ಸದಾನಂದ ಶೆಣೈ ಹಾಗೂ ವಿಶ್ವಹಿಂದು ಪರಿಷದ್ ಶಿರ್ವ ವಲಯದ ಗೌರವಾಧ್ಯಕ್ಷರಾದ ಬೆಳ್ಳೆ ಮಧ್ವರಾಜ ಭಟ್ ಬೆಳ್ಳೆ ಚಾಲನೆ ನೀಡಿದರು.




ಹಿಂದುವಾದವನು ಗೋಸೇವೆ ಮಾಡಲೇಬೇಕು ಸಾಕಲು ಆಗದಿದ್ದರೂ ಸಾಕುವವರಿಗೆ ಪ್ರೋತ್ಸಾಹ ನೀಡುವುದು, ಗೋಗ್ರಾಸ ನೀಡುವುದು ಮಾಡಬಹುದು. ಪೇಜಾವರ ಮಠಾಧೀಶರಾದ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರು ನೀಲಾವರದಲ್ಲಿ ಸಾವಿರಾರು ಅನಾಥ ಗೋವುಗಳನ್ನು ಸಾಕಲು ಲಕ್ಷಾಂತರ ರೂಪಾಯಿ ಖರ್ಚು ಮಾಡುತ್ತಿದ್ದಾರೆ.
ಅವರೊಂದಿಗೆ ನಾವು ಕೈಜೋಡಿಸಿ ಅಳಿಲುಸೇವೆ ಮಾಡುವುದು ನಮಗೆ ಸಿಕ್ಕಿರುವ ದೊಡ್ಡ ಅವಕಾಶ ಇದನ್ನು ಸದುಪಯೋಗ ಮಾಡಿಕೊಂಡು ನಿರಂತರವಾಗಿ ಸಮಾಜಕ್ಕಾಗಿ ಗೋವಿಗಾಗಿ ಇಂಥ ಕೆಲಸಗಳನ್ನು ಮಾಡಲು ನಮ್ಮನ್ನು ತೊಡಿಗಿಸಿಕೊಳ್ಳೋಣ ಎಂದು ಬೆಳ್ಳೆ ಮಧ್ವರಾಜ ಭಟ್ ತಿಳಿಸಿದರು.

ರಾಷ್ಟ್ರಿಯ ಸ್ವಯಂ ಸೇವಾ ಸಂಘದ ಸೇವಾ ಪ್ರಮುಖ್ ಸುಬ್ರಹ್ಮಣ್ಯ ವಾಗ್ಲೆ, ಹಾಗೂ ಊರಿನ ಹಿರಿಯ ಪಟೇಲ್ ಮನೆ ದಯಾನಂದ ಶೆಟ್ಟಿ, ಭಟ್ರ ಮನೆ ಪುಂಡರೀಕಾಕ್ಷ ಭಟ್, ದೊಡ್ಡಮನೆ ಅಶೋಕ ಶೆಟ್ಟಿ, ಮತ್ತು ವಿಶ್ವಹಿಂದು ಪರಿಷದ್, ಬಜರಂಗದಳ ಮಟ್ಟಾರು, ಮೂಡುಬೆಳ್ಳೆ, ಬಂಟಕಲ್ಲು,ಎಡ್ಮರ್,ಶಿರ್ವ,ಪಡುಬೆಳ್ಳೆ ಘಟಕದ ಅಧ್ಯಕ್ಷರು, ಗೋಪ್ರಮುಖ್, ಪದಾಧಿಕಾರಿಗಳು ,ಗ್ರಾಮದ ಪ್ರಮುಖರು ಉಪಸ್ಥಿತರಿದ್ದರು.