ಜಿ. ಶಂಕರ್‌ ಫ್ಯಾಮಿಲಿ ಟ್ರಸ್ಟ್‌ ಹಾಗೂ ಮೊಗವೀರ ಯುವ ಸಂಘಟನೆ ಅಶ್ರಯದಲ್ಲಿ ಭಾನುವಾರ 12ನೇ ವರ್ಷದ  ಸರಳ ಸಾಮೂಹಿಕ ವಿವಾಹ

ಉಡುಪಿ: ಜಿ. ಶಂಕರ್‌ ಫ್ಯಾಮಿಲಿ ಟ್ರಸ್ಟ್‌ ಹಾಗೂ ಮೊಗವೀರ ಯುವ ಸಂಘಟನೆ ಅಶ್ರಯದಲ್ಲಿ ಭಾನುವಾರ 12ನೇ ವರ್ಷದ  ಸರಳ ಸಾಮೂಹಿಕ ವಿವಾಹ ಹಾಲಾಡಿಯ ಶಾಲಿನಿ ಜಿ. ಶಂಕರ್‌ ಕನ್ವೆನಶನ ಸೆಂಟರ್‌ ಹಾಗೂ ಓಪನ್‌ ಗಾರ್ಡನ್‌ ಸಭಾಂಗಣದಲ್ಲಿ ನಡೆಯಿತು.
25 ಜೋಡಿಗಳು ವಿವಾಹದಲ್ಲಿ ಪಾಲ್ಗೊಂಡಿದ್ದರು. ಈ ಸಂದರ್ಭದಲ್ಲಿ ಮಾತನಾಡಿದ ನಾಡೋಜ ಡಾ. ಜಿ. ಶಂಕರ್‌, ಕೋವಿಡ್‌ ಮಾರ್ಗಸೂಚಿ ಕಾರಣದಿಂದ ಸೀಮಿತ ಜನರಿಗೆ ಮಾತ್ರ ಪ್ರವೇಶವಿದ್ದು, ಮನೆಯಲ್ಲೆ ಉಳಿದು ಅಶೀರ್ವಾದ ನೀಡಿದ ಮದುವೆ ಜೋಡಿಗಳ ಕುಟುಂಬಸ್ಥರಿಗೆ ಅಭಿನಂದನೆ ಸಲ್ಲಿಸಿದರು.
ಮೊಗವೀರ ಯುವ ಸಂಘಟನೆ ಅಧ್ಯಕ್ಷ ಶಿವರಾಂ, ಕಾರ್ಯದರ್ಶಿ ರಾಜೇಂದ್ರ ಹಿರಿಯಡ್ಕ ಮೊದಲಾದವರು ಉಪಸ್ಥಿತರಿದ್ದರು.

 
 
 
 
 
 
 
 
 
 
 

Leave a Reply