ಗೋ ಕಥಾ ಸಪ್ತಾಹ ಮಹೋತ್ಸವದಲ್ಲಿ ಶಾಸಕ ರಘುಪತಿ ಭಟ್ ಭಾಗಿ

ಪುಣ್ಯಕೋಟಿ ಗೋ ಸೇವಾ ಕೇಂದ್ರ, ಆರೂರು ಬ್ರಹ್ಮಾವರ, ಉಡುಪಿ ಜಿಲ್ಲೆ ಇದರ ಗೋ ಕಥಾ ಸಪ್ತಾಹ ಮಹೋತ್ಸವ ಕಾರ್ಯಕ್ರಮದಲ್ಲಿ ​ಬುಧವಾರದಂದು  ಶಾಸಕ ಶ್ರೀ ಕೆ ರಘುಪತಿ ಭಟ್ ರವರು ಭಾಗವಹಿಸಿ ಶುಭ ಹಾರೈಸಿದರು.

ಈ ಸಂದರ್ಭದಲ್ಲಿ ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ರಾಘವೇಂದ್ರ ಕಿಣಿ, ಬ್ರಹ್ಮಾವರ ತಾಲೂಕು ಪಂಚಾಯತ್ ಸದಸ್ಯ ನಳಿನಿ ಪ್ರದೀಪ್ ರಾವ್, ಆರೂರು ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ರಾಜು ಕುಲಾಲ್, ಉಪಾಧ್ಯಕ್ಷ ಗಣೇಶ್ ಕುಲಾಲ್, ಆರೂರು ಗೋಶಾಲೆಯ ನಿರ್ವಾಹಕರು ಹಾಗೂ ನಾಡಿ ಚಿಕಿತ್ಸಕ ಭಕ್ತಿ ಭೂಷಣ್.ಮಥುರೈ ನಂದಗೋಕುಲದ ಶ್ರೀಕೃಷ್ಣ ದೇವರ ಅರ್ಚಕ ಬ್ರಿಜೇಶ್ ಗೋಸ್ವಾಮಿ, ಪುಣ್ಯಕೋಟಿ ಗೋ ಸೇವಾ ಟ್ರಸ್ಟಿನ ಅಧ್ಯಕ್ಷಗಣೇಶ್ ನಾಯಕ್, ಸದಸ್ಯ ಶ್ರೀನಿವಾಸ್, ಗೋ ಕಥಾ ಸಪ್ತಾಹ ಮ​​ಹೋತ್ಸವದ ಅಧ್ಯಕ್ಷ ಆನಂದ್ ಅಮೀನ್ ಹಾಗೂ ಪ್ರಮುಖರು ಮತ್ತು ಸ್ಥಳೀಯರು ಉಪಸ್ಥಿತರಿದ್ದರು.

 
 
 
 
 
 
 
 
 
 
 

Leave a Reply