ಗೋಹತ್ಯಾ ನಿಷೇಧಕ್ಕೆ ಕಾಂಗ್ರೆಸ್ ಪಕ್ಷ ವಿರೋಧವಿಲ್ಲ~ಭಾಸ್ಕರ್ ರಾವ್ ಕಿದಿಯೂರು

ಉಡುಪಿ: ಗೋಹತ್ಯಾ ನಿಷೇಧ ಮಸೂದೆ ಸರಕಾರದ ಕಣ್ಣೊರೆಸುವ ತಂತ್ರವಾಗಿದ್ದು, ಸರಕಾರಕ್ಕೆ ಗೋ ಹತ್ಯೆ ತಡೆಯುವ ನಿಜವಾದ ಇಚ್ಚಾಶಕ್ತಿ ಸರಕಾರಕ್ಕೆ ಇದ್ದಲ್ಲಿ ಗೋಮಾಂಸ ರಫ್ತಿಗೂ ನಿಷೇಧ ಹೇರಬೇಕು ಎಂದು ಜಿಲ್ಲಾ ಕಾಂಗ್ರೆಸ್ ವಕ್ತಾರ ಭಾಸ್ಕರ್ ರಾವ್ ಕಿದಿಯೂರು ತಿಳಿಸಿದ್ದಾರೆ.​​
ಗೋಹತ್ಯಾ ನಿಷೇಧಕ್ಕೆ ಕಾಂಗ್ರೆಸ್ ಪಕ್ಷ ವಿರೋಧವಿಲ್ಲ. ಇದನ್ನು ವಿರೋಧ ಪಕ್ಷದ ನಾಯಕರಾದ ಸಿದ್ಧರಾಮಯ್ಯ ನವರೂ ಸ್ಟಷ್ಟಿಕರಿಸಿದ್ದಾರೆ. ಆದರೆ ವಿಧಾನಸಭೆಯಲ್ಲಿ ಮಸೂದೆ ಮಂಡನೆ ಮಾಡುವಾಗ ಚರ್ಚೆಗೆ ಆಸ್ಪದ ನೀಡದೆ ಏಕಾಏಕಿ ಜಾರಿಗೆ ತಂದಿರುವುದು ತಪ್ಪು. 
 
ತಜ್ಞರೊಡನೆ ಚರ್ಚಿಸಿ ಸಾಧಕ-ಭಾದಕಗಳ ಚಿಂತನೆ ನಡೆಸದೆ ಭಾವನಾತ್ಮಕವಾಗಿ ಕಾಯ್ದೆ ಜಾರಿ ಮಾಡಿದ ವಿಧಾನಕ್ಕೆ ಕಾಂಗ್ರೆಸ್ ಪಕ್ಷದ ವಿರೋಧವಿದೆ. ವೃದ್ಧ ಗೋವುಗಳ ಕುರಿತಾಗಿ ಭಾವನಾತ್ಮಕವಾಗಿ ಮಾತನಾಡಬಹುದೇ ಹೊರತು ವಾಸ್ತವ ಬಹಳ ಕಷ್ಟವಿದೆ. ಒಂದೇ ಸರಕಾರ ಸುಸಜ್ಜಿತ ಗೋಶಾಲೆಗಳನ್ನು ಸ್ಥಾಪಿಸಿ ಅಲ್ಲಿ ವೃದ್ಧ ಗೋವುಗಳ ಸಾಕುವ ವ್ಯವಸ್ಥೆ ಮಾಡಿ ಎಲ್ಲಾ ರೀತಿಯ ವಯಸ್ಸಿನ ಗೋಹತ್ಯೆ ನಿಷೇಧ ಮಾಡಿದರೆ ಮಾತ್ರ ಧರ್ಮ ಪಾಲನೆ ಮಾಡಿದಂತಾಗುವುದು​ ಎಂದರು.  
 
 
 
 
 
 
 
 
 

Leave a Reply