ಬಡಗುಬೆಟ್ಟು ಸೊಸೈಟಿಗೆ​ ​ಕೃಷ್ಣಾಪುರ ಮಠಾಧೀಶರ ಭೇಟಿ

ಉಡುಪಿ ; ಉಡುಪಿ ಶ್ರೀ ಕೃಷ್ಣ ಮಠದ   ಭಾವೀ ಪರ್ಯಾಯ ಕೃಷ್ಣಾಪುರ ಮಠಾಧೀಶರಾದ  ಶ್ರೀ ವಿದ್ಯಾಸಾಗರತೀರ್ಥ ಶ್ರೀಪಾದರು  ಬುಧವಾರ  ಸಂಜೆ ಬಡಗುಬೆಟ್ಟು ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ಗೆ ಭೇಟಿ ನೀಡಿದರು. 
ಪ್ರಧಾನ ವ್ಯವಸ್ಥಾಪಕ ಜಯಕರ ಶೆಟ್ಟಿ ಇಂದ್ರಾಳಿ ಸ್ವಾಗತಿಸಿ ಸಂಸ್ಥೆ ವತಿಯಿಂದ ಶ್ರೀಪಾದರನ್ನು ಗೌರವಿಸಿ ಕಾಣಿಕೆಯನ್ನು ಸಮರ್ಪಿಸಿದರು. ಬಳಿಕ ಮಾತನಾಡಿದ ಶ್ರೀಪಾದರು ಸಹಕಾರಿ  ಕ್ಷೇತ್ರದಲ್ಲಿ ಇನ್ನು ಹೆಚ್ಚಿನ ಸಾಧನೆ ಮಾಡುವಂತೆ ಉಡುಪಿ ಶ್ರೀಕೃಷ್ಣದೇವರು ಎಲ್ಲರನ್ನು ಅನುಗ್ರಹಿಸಲಿ ಎಂದು ಸಂದೇಶ ನೀಡಿದರು. 
ಉಪಾಧ್ಯಕ್ಷ ಎಲ್ . ಉಮಾನಾಥ, ಆಡಳಿತ ಮಂಡಳಿಯ ಸದಸ್ಯರಾದ ಶ್ರೀಮತಿ ಗಾಯತ್ರಿ ಭಟ್, ವಿನಯಕುಮಾರ್, ಪದ್ಮನಾಭ ನಾಯಕ್, ಜಯಾನಂದ ಮೆಂಡನ್, ಶ್ರೀಮತಿ ಜಯ ಶೆಟ್ಟಿ, ಸದಾಶಿವ ನಾಯ್ಕ್,  AGM ರಾಜೇಶ್ ಶೇರಿಗಾರ್, ಬ್ಯಾಂಕಿನ ಸಿಬ್ಬಂದಿಗಳು ಉಪಸ್ಥಿತರಿದ್ದರು.  ಶಾಖಾ ವ್ಯವಸ್ಥಾಪಕ ಪ್ರವೀಣ್ ಕುಮಾರ್ ನಿರೂಪಿಸಿದರು. 
 
 
 
 
 
 
 
 
 
 
 

Leave a Reply