ಈ ಬಾರಿ ಶಬರಿಮಲೆಯಲ್ಲಿ ಕೇರಳ ಸರಕಾರ ಕೋವಿಡ್ ಮುಂಜಾಗ್ರತೆಯ ನೆಪದಲ್ಲಿ 16 ನವಂಬರ್ 2020 ರಿಂದ ಅಯ್ಯಪ್ಪ ಭಕ್ತರಿಗೆ ಕೆಲವೊಂದು ನಿರ್ಬಂಧನೆಯನ್ನು ಹೊರಡಿಸಲು ಪೂರ್ವ ತಯಾರಿ ಮಾಡಿಕೊಂಡಿದೆ. ಶಬರಿಮಲೆಗೆ ಪ್ರವೇಶಿಸಲು ದಿನ ವೊಂದಕ್ಕೆ 1000 ಹಾಗೂ ವಿಶೇಷ ದಿನಗಳಲ್ಲಿ 5000 ಭಕ್ತರಿಗೆ ಮಾತ್ರ ಅನುಮತಿ ಆನ್ಲೈನ್ ಮೂಲಕ ರೆಜಿಸ್ಟರ್ ಮಾಡಿಕೊಂಡ ವರಿಗೆ ಮಾತ್ರ ಅವಕಾಶ
ವರ್ಚುಯಲ್ ಕ್ಯೂನಲ್ಲಿ ನೊಂದಾಯಿಸಿಕೊಳ್ಳಲು ಕೋವಿಡ್ ನೆಗೆಟಿವ್ ಸರ್ಟಿಫಿಕೇಟನ್ನು ಕಡ್ಡಾಯವಾಗಿ ಹೊಂದಿರಬೇಕು. ದರ್ಶನದ ದಿನದಂದು ಕೋವಿಡ್ ನೆಗೆಟಿವ್ ಎಂದು ದ್ರಢಪಡಿಸಿಕೊಂಡು, ತದ ನಂತರವಷ್ಟೇ ದರ್ಶನಕ್ಕೆ ಅವಕಾಶ. 10ರಿಂದ 60 ವರ್ಷದ ಒಳಗಿನ ವೃತಾಧಾರಿಗಳಿಗೆ ಮಾತ್ರ ಅನುಮತಿ. ಅಂದರೆ 60ಕ್ಕೆ ಮೇಲ್ಪಟ್ಟ ಹಿರಿಯ ಗುರುಸ್ವಾಮಿಗಳಿಗೆ ಅವಕಾಶ ವಿರುವುದಿಲ್ಲ. ಪಂಬಾ ನದಿಯಲ್ಲಿ ಸ್ನಾನ ಮಾಡುವಂತಿಲ್ಲ.
ಎಂದಿನಂತೆ ಒಟ್ಟಾಗಿ ಶರಣ ಘೋಷಗಳನ್ನು ಮಾಡುವಂತಿಲ್ಲ. 18 ಮೆಟ್ಟಿಲುಗಳೇರಿ ಸನ್ನಿಧಾನಕ್ಕೆ ಹೋಗುವಂತಿಲ್ಲ. ತುಪ್ಪಾಭಿಷೇಕ ನಿಷೇಧಿಸಲಾಗಿದೆ. ಸರಕಾರಿ ವಾಹನದ ವ್ಯವಸ್ಥೆಯ ಸಾಧ್ಯತೆ ಕಡಿಮೆ. ವಿಶೇಷ ಸೇವೆಗಳು ಯಾವುದೂ ಇರುವುದಿಲ್ಲ. ಮುಖ್ಯವಾಗಿ ಯಾವುದೇ ರೀತಿಯ ಪ್ರಸಾದ ವಿತರಣೆ, ಊಟದ ಹಾಗೂ ನೀರಿನ ವ್ಯವಸ್ಥೆ ಇರುವುದಿಲ್ಲ. ವಿಶ್ರಾಂತಿಗಾಗಿ ಹೆಚ್ಚಿನ ಎಲ್ಲಾ ಕಡೆಗಳಲ್ಲಿ ಅವಕಾಶಗಳಿಲ್ಲ. ಕೋವಿಡ್ ಸಾಂಕ್ರಾಮಿಕ ಕಾಯಿಲೆಯು ಹೆಚ್ಚಿನ ಪ್ರಮಾಣದಲ್ಲಿ ಹಬ್ಬುತ್ತಿರುವುದರಿಂದ ಅಕ್ಟೋಬರ್ 31ರ ತನಕ ಕೇರಳದಾದ್ಯಂತ 5 ಕ್ಕಿಂತ ಹೆಚ್ಚಿನ ಜನರು ಒಂದು ಕಡೆ ಸೇರುವುದನ್ನು ನಿಷೇಧಿಸಲಾಗಿದೆ.
(ಹೆಚ್ಚಿನ ದಿನಗಳಿಗೆ ವಿಸ್ತರಿಸಬಹುದು). ನೀಲಕ್ಕಲ್ ನಲ್ಲಿ ಕೋವಿಡ್ ಪಾಸಿಟಿವ್ ಬಂದ ಭಕ್ತಾದಿಗಳಿಗೆ ಕೇರಳ ಸರಕಾರ ಅಥವಾ ದೇವಾಸ್ವಮ್ ಬೋರ್ಡ್ ಯಾವುದೇ ಪರ್ಯಾಯ ವ್ಯವಸ್ಥೆಯ ಬಗ್ಗೆ ಈ ವರೆಗೆ ಹೇಳಿಕೆಯನ್ನು ನೀಡಿರುವುದಿಲ್ಲ. ಒಟ್ಟಾರೆಯಾಗಿ ಈ ಬಾರಿ ಶಬರಿಮಲೆಗೆ ಹೋಗುವ ಭಕ್ತರಿಗೆ ಅಲ್ಲಿ ಹೆಚ್ಚಿನ ಎಲ್ಲಾ ಶ್ರದ್ದೆ, ಭಕ್ತಿ, ಆಚರಣೆಗಳನ್ನು ನಿಷೇಧಿಸಲಾಗಿದೆ.
ಆದುದರಿಂದ ಅಯ್ಯಪ್ಪ ವೃತಾಧಾರಿಗಳು 41 ದಿನಗಳಕಾಲ ವೃತವನ್ನು ಪಾಲಿಸಿ ತಮಗೆ ಅನುಕೂಲವಾಗುವ ಅಯ್ಯಪ್ಪ ದೇವಸ್ಥಾನ ಗಳಲ್ಲಿ ಕೋವಿಡ್ ಮುನ್ನಚ್ಚರಿಕೆ ಕ್ರಮಗಳನ್ನು ಪಾಲಿಸಿ ತಮ್ಮ ಪೂಜಾ ವಿದಿವಿಧಾನವನ್ನು ಮಾಡಿ ಶ್ರೀ ದೇವರಲ್ಲಿ ಕೋವಿಡ್ ಸಾಂಕ್ರಾ ಮಿಕ ಖಾಯಿಲೆಗೆ ಶಾಶ್ವತ ಪರಿಹಾರಕ್ಕಾಗಿ ಪ್ರಾರ್ಥಿಸುವುದರೊಂದಿಗೆ ಮುಂದಿನ ವರ್ಷಕ್ಕೆ ತಮ್ಮ ಶಬರಿಮಲೆ ಯಾತ್ರೆಯನ್ನು ಮುಂದೂಡಿದರೆ ಉತ್ತಮ.
ವಿ ಸೂ :ದಿನಾಂಕ 8.11.2020 ರಂದು ಸಾಸ್ ಇದರ ಅಯ್ಯಪ್ಪ ಸಂಗಮಮ್ ಅನ್ನುವ ಕಾರ್ಯಕ್ರಮದ ನೇರಪ್ರಸಾರ ಜನಮ್ ಟಿವಿಯಲ್ಲಿ ಬರಲಿದೆ. ಅದನ್ನು ವೀಕ್ಷಿಸಿ ಹೆಚ್ಚಿನ ಮಾಹಿತಿ ಪಡೆದುಕೊಳ್ಳಬೇಕು ಎಂದು ಶಬರಿಮಲೈ ಅಯ್ಯಪ್ಪ ಸೇವಾ ಸಮಾಜಂ ಉಡುಪಿ ಜಿಲ್ಲಾ ಘಟಕದ ಅಧ್ಯಕ್ಷ ರಾಧಕೃಷ್ಣ ಮೆಂಡನ್, ಪ್ರಧಾನ ಕಾರ್ಯದರ್ಶಿ ರಂಜಿತ್ ಶೆಟ್ಟಿ ಹಾವಂಜೆ ಸಂಘಟನಾ ಕಾರ್ಯದರ್ಶಿ ಪ್ರಕಾಶ್ ಶೆಟ್ಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ