ಶ್ರೀಕೃಷ್ಣ ಮಠದ ಗೋಶಾಲೆಯಲ್ಲಿ, ಪರ್ಯಾಯ ಅದಮಾರು ಶ್ರೀಈಶಪ್ರಿಯತೀರ್ಥ ಶ್ರೀಪಾದರು, ಗೋಮಾತೆಯ ಸೇವೆ ಒಂದರಿಂದಲೇ ಮುಕ್ಕೋಟಿ ದೇವತೆಗಳ ಅನುಗ್ರಹ ಪ್ರಾಪ್ತಿಯಾಗುತ್ತದೆ. ಪ್ರಸ್ತುತ ಕಾಲಘಟ್ಟದಲ್ಲಿ ಧಾರ್ಮಿಕ ಶ್ರದ್ಧಾ ಕೇಂದ್ರಗಳು ಧಾರ್ಮಿಕ ಮುಖಂಡರುಗಳು ಮುಂದೆ ಬಂದು ಗೋಮಾತೆಯನ್ನು ಸಂರಕ್ಷಿಸುವ ನಿಟ್ಟಿನಲ್ಲಿ ಕಾಳಜಿ ವಹಿಸಿದಲ್ಲಿ ಗೋಮಾತೆಯ ಉಳಿವು ಸಾಧ್ಯ.
ಈ ನಿಟ್ಟಿನಲ್ಲಿ ದೊಡ್ಡಣಗುಡ್ಡೆ ಶ್ರೀ ದುರ್ಗಾ ಆದಿಶಕ್ತಿ ಕ್ಷೇತ್ರದ ಧರ್ಮದರ್ಶಿ ರಮಾನಂದ ಗುರೂಜಿ ಅವರು ಸಂಕಲ್ಪಿಸಿರುವ ಗೋಶಾಲೆ ನಿರ್ಮಾಣ ಕಾರ್ಯ ಶ್ಲಾಘನೀಯ ಶ್ರೀಕೃಷ್ಣ ಮುಖ್ಯಪ್ರಾಣರ ಅನುಗ್ರಹದಿಂದ ಸಂಕಲ್ಪಿಸಿದ ಕಾರ್ಯ ನಿರ್ವಿಘ್ನವಾಗಿ ಈಡೇರಲಿ ಎಂದು ಪ್ರಾರ್ಥಿಸಿ, ಗೋಪೂಜೆಯನ್ನು ನೆರವೇರಿಸಿ ಶ್ರೀಕೃಷ್ಣ ಮಠದ ವತಿಯಿಂದ ಪ್ರಥಮ ಕಾಣಿಕೆಯಾಗಿ ಗೋಮಾತೆಯನ್ನು ಅವರಿಗೆ ಹಸ್ತಾಂತರಿಸಿ ಅನುಗ್ರಹ ಮಂತ್ರಾಕ್ಷತೆ ಇತ್ತು ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಪರ್ಯಾಯ ಅದಮಾರು ಮಠದ ದಿವಾನ ಲಕ್ಷ್ಮೀನಾರಾಯಣ ಮುಚ್ಚಿಂತಾಯರು,ವ್ಯವಸ್ಥಾಪಕ ಗೋವಿಂದ್ರಾಜ್, ಪಿ.ಅರ.ಓ ಶ್ರೀಶ ಕಡೆಕಾರ್, ಶ್ರೀಕ್ಷೇತ್ರ ಆದಿ ಶಕ್ತಿಯ ಉಸ್ತುವಾರಿ ಶ್ರೀಮತಿ ಕುಸುಮಾ ನಾಗರಾಜ್, ಪ್ರಜ್ಞೆಾ ಇಂಟರ್ ನ್ಯಾಷನಲ್ ಶಾಲೆ ಪ್ರಾಂಶುಪಾಲೆ ಶ್ರೀಮತಿ ಉಷಾ ರಮಾನಂದ್ , ಕ್ಷೇತ್ರದ ಸ್ವಾತಿ ಸ್ವಸ್ತಿಕ್ ಆಚಾರ್ಯ, ಮೃಣಾಲ್ ಕೃಷ್ಣ ಮೊದಲಾದವರು ಉಪಸ್ಥಿತರಿದ್ದರು